ಸುಳ್ಯ:ವೀಕೆಂಡ್ ಕರ್ಫ್ಯೂ ರದ್ದು ಹಾಗೂ ಹಲವು ನಿಬಂಧನೆಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಮಾತ್ರ ರಾಜ್ಯ ಸರ್ಕಾರ ನೀಡಿ ಕರ್ಫ್ಯೂ ಜಾರಿಗೊಳಿಸಿದ್ದು ದೃಢವಾಗಿದೆ ಎಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ತಿಳಿಸಿದ್ದಾರೆ. ಮೇಕೆದಾಟು
ಪಾದಯಾತ್ರೆಯಿಂದ ಬಿ.ಜೆ.ಪಿ.ಗೆ ಉಂಟಾಗುವ ಹಿನ್ನಡೆಯನ್ನು ಅರಿತು ಕೊರೋನಾ ನೆಪವೊಡ್ಡಿ ಪಾದಯಾತ್ರೆಯನ್ನು ತಡೆಯಲಾಗಿತ್ತು. ಪ್ರಸ್ತುತ ಕೋವಿಡ್ ಪ್ರಕರಣಗಳು ಇಳಿಕೆಯಾಗದಿದ್ದರೂ ಕೂಡ ಕರ್ಫ್ಯೂವನ್ನು ರದ್ದುಗೊಳಿಸಲಾಗಿದೆ. ಈಗ ಸರ್ಕಾರಕ್ಕೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.ಬಿ.ಜೆ.ಪಿ.ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಮಾತ್ರ ಕರ್ಫ್ಯೂ ಜಾರಿಗೊಳಿಸಿತ್ತೇ ಹೊರತು ಜನಸಾಮಾನ್ಯರ ಆರೋಗ್ಯದ ಹಿತಕ್ಕಾಗಿ ಅಲ್ಲ ಎಂದು ಶೌವಾದ್ ಹೇಳಿದ್ದಾರೆ.